ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ನಾಡಲಿ ನಲಿಯುವ ಮಕ್ಕಳೆ ಇಂದು
ನುಡಿಯುವ ಕನ್ನಡ ನುಡಿಯೆ ಎಂದು
ಊರಲಿ ಹಬ್ಬದ ಕಳೆಯೆ ಬಂದು
ಎಂದಿಗೂ ಮರೆಯದ ದಿನವೇ ಒಂದು
ಬಂದಿದೆ ಇಂದು ನವೆಂಬರ್ ಒಂದು
ಮೊಳಗಲಿ ರಾಜ್ಯೋತ್ಸವದ ಸಿಂಧು
ಕನ್ನಡ ತಾಯಿಯ ಸೇವೆಗೆ ಇಂದು
ಕನ್ನಡ ಬಂಧು ಗಳೆಲ್ಲ ಬಂದು
ಮೆರೆಯಲಿ ಕನ್ನಡ ಕೀರ್ತಿಯ ಎಂದೂ
ಕರುನಾಡು ಒಗ್ಗೂಡಿದ ದಿನವೆ ಇಂದು
ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ
ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ ....
0 comments:
Post a Comment